88929 25504
 
  • Total Visitors: 3745730
  • Unique Visitors: 308259
  • Registered Users: 35949

Error message

  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Deprecated function: implode(): Passing glue string after array is deprecated. Swap the parameters in drupal_get_feeds() (line 394 of /home4/devan1ay/public_html/includes/common.inc).

ಕರ್ನಾಟಕ ರಾಜ್ಯ ದೇವಾಂಗ ಸಂಘದ ಪದಾಧಿಕಾರಿಗಳ ಸಭೆ :

ದಿನಾಂಕ : 03-08-2016 ರಂದು ಚಿಕ್ಕಮಗಳೂರು ಜಿಲ್ಲೆ, ತರೀಕೆರೆ ತಾಲ್ಲೂಕಿನ ಕರಕುಚ್ಚಿ ಗ್ರಾಮದ ಶ್ರೀ ಎಸ್. ಲಕ್ಷ್ಮಣ್ ( ಕರಕುಚ್ಚಿ ) ಇವರ ನಿವಾಸದಲ್ಲಿ ನಡೆದ ಕರ್ನಾಟಕ ರಾಜ್ಯ ದೇವಾಂಗ ಸಂಘದ ಪದಾಧಿಕಾರಿಗಳ ಸಭೆಯ ನಂತರ ರಾಜ್ಯ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಂಜೆ ತರೀಕೆರೆ ತಾಲ್ಲೂಕಿನ ಹುಣಸಘಟ್ಟ, ಶಿವನಿ ಮತ್ತು ಅಜ್ಜಂಪುರ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಸಮಾಜದ ಮುಖಂಡರುಗಳ ಜೊತೆಗೆ ಸಭೆ ನಡೆಸಿದರು.

ಹುಣಸಘಟ್ಟ, ಶಿವನಿ ಗ್ರಾಮಗಳಿಗೆ ಭೇಟಿ ನೀಡಿದ ನಂತರ ಅಜ್ಜಂಪುರಕ್ಕೆ ಭೇಟಿ ನೀಡಲಾಯಿತು. ತಡವಾದರೂ ಸಹ ಅಲ್ಲಿನ ಸಮಾಜದ ಮುಖಂಡರು, ಹಿರಿಯರು, ಬಾಂಧವರು, ಮಹಿಳೆಯರು ಮತ್ತು ಮಕ್ಕಳು ನೂರಾರು ಜನರು ಸೇರಿ ರಾಜ್ಯ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಸ್ವಾಗತವನ್ನು ಕೋರಿದರು.

ಸಮಾಜದ ಸಂಘಟನೆ ಹಾಗೂ ಅಭಿವೃದ್ಧಿಯ ಕುರಿತು ಕರ್ನಾಟಕ ರಾಜ್ಯ ದೇವಾಂಗ ಸಂಘದ ಅಧ್ಯಕ್ಷರಾದ ಡಾ. ಜಿ.ರಮೇಶ್ ರವರು ಮಾತನಾಡುತ್ತ ಸಮಾಜದ ಸಂಘಟನೆ ಹಾಗೂ ಅಭಿವೃದ್ಧಿಗಾಗಿ ಈಗಾಗಲೇ ರಾಜ್ಯದ ಸುಮಾರು 25 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ರಾಜ್ಯ ಸಂಘದ ದ್ಯೇಯ, ಉದ್ದೇಶಗಳನ್ನು ಸಮಾಜ ಬಾಂಧವರಿಗೆ ತಿಳಿಸಲಾಗುತ್ತಿದೆ.  ಹೋದ ಕಡೆಗಳಲ್ಲೆಲ್ಲ ನಮ್ಮ ಉದ್ದೇಶಗಳಿಗೆ ಸ್ಪಂದಿಸಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯ ಸಂಘಕ್ಕೆ ಸದಸ್ಯರಾಗುವ ಮೂಲಕ ಸಂಘಕ್ಕೆ ಬಲವನ್ನು ತುಂಬುತ್ತಿದ್ದಾರೆ. ಜೊತೆಗೆ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ರೂಪಿಸಬೇಕು ಆಗ ಮಾತ್ರ ನಮ್ಮ ಸಮಾಜವನ್ನು ಬಲಿಷ್ಠ ಗೊಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ರಾಜ್ಯ ಸಂಘವು " ವಿದ್ಯಾ ನಿಧಿ " ಯೋಜನೆಯನ್ನು ರೂಪಿಸಿದ್ದು ಇದಕ್ಕೆ ಈಗಾಗಲೇ ಸುಮಾರು 60 ಜನರು ಮಹಾಪೋಷಕರಾಗುವ ಮೂಲಕ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.

 

ಕೇವಲ 60 ಸದಸ್ಯರಿಂದ ಪ್ರಾರಂಭವಾದ ರಾಜ್ಯ ಸಂಘದಲ್ಲಿ ನೂತನ ಕಾರ್ಯಕಾರಿ ಮಂಡಳಿ ಅಸ್ತಿತ್ವಕ್ಕೆ ಬಂದ 9 ತಿಂಗಳ ಅಲ್ಪಾವಧಿಯಲ್ಲಿಯೇ ಸುಮಾರು 3 ಸಾವಿರಕ್ಕೂ ಹೆಚ್ಚು ಜನ ರಾಜ್ಯ ಸಂಘಕ್ಕೆ ಸದಸ್ಯರಾಗಿ ನಮ್ಮ ಜೊತೆ ಸೇರಿ ಕೆಲಸ ಮಾಡುವ ಮೂಲಕ ಸಂಘಕ್ಕೆ ಬಲವನ್ನು ತುಂಬುತ್ತಿದ್ದಾರೆ. 25 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಮಾಡಿ ನಂತರ ಚುನಾವಣೆ ನಡೆಸುವ ಮೂಲಕ ಪದಾಧಿಕಾರಿಗಳ ಆಯ್ಕೆ ಮಾಡಲು ಎಲ್ಲ ವಿಭಾಗಗಳಿಗೂ ಪ್ರಾತಿನಿಧ್ಯ ನೀಡಲಾಗುವುದು ಎಂದರು.

 ಸರ್ಕಾರದ ಅಂಕಿ ಅಂಶಗಳ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ದೇವಾಂಗ ಸಮಾಜದವರು ಕೇವಲ 3.80 ಲಕ್ಷದಷ್ಟು ಜನರಿದ್ದಾರೆ ಎಂದಿದೆ. ಆದರೆ ಈ ಮಾಹಿತಿ ತಪ್ಪು. ಆದ್ದರಿಂದ ರಾಜ್ಯದಲ್ಲಿ ವಾಸಿಸುತ್ತಿರುವ ದೇವಾಂಗ ಸಮಾಜ ಬಾಂಧವರ ನಿಖರವಾದ ಸಂಖ್ಯೆಯನ್ನು ಗುರುತಿಸುವ ಸಲುವಾಗಿ ಸಮುದಾಯದ ಜನಗಣತಿ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ಇದರ ಕಾರ್ಯವು ಪ್ರಗತಿಯಲ್ಲಿದೆ ಎಂದರು. ಸಭೆ ಇಷ್ಟು ತಡವಾಗಿ ಪ್ರಾರಂಭವಾದರೂ ತಾಳ್ಮೆಯಿಂದ ಕಾದಿದ್ದು ಸಭೆಯ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ದನ್ಯವಾದಗಳನ್ನು ಸಲ್ಲಿಸಿದರು.

 

ಈ ಸಾಲಿನಲ್ಲಿ  ನಡೆದ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ಸಮಾಜದ ಮಕ್ಕಳಿಗೆ ಪುರಸ್ಕಾರ ನೀಡಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದೇವಾಂಗ ಸಂಘದ ಅಧ್ಯಕ್ಷರಾದ ಡಾ. ಜಿ.ರಮೇಶ್ ರವರ ಜೊತೆ ಉಪಾಧ್ಯಕ್ಷರಾದ ಶ್ರೀ ಎ. ನಾರಾಯಣ ಸ್ವಾಮಿ, ಶ್ರೀ ಎ.ಎನ್. ಕೃಷ್ಣಮೂರ್ತಿ, ಸಹ ಕಾರ್ಯದರ್ಶಿಗಳಾದ ಶ್ರೀ ಸಿ. ರಾಜಣ್ಣ, ಶ್ರೀ ಟಿ. ಆರ್. ಉಮಾಪತಿ, ಶ್ರೀ ಡಿ. ಟಿ. ಚಂದ್ರಶೇಖರ್, ಶ್ರೀ ಟಿ. ಆರ್. ಶ್ರೀಧರ್, ಶ್ರೀ ಹೆಚ್. ಜಿ. ಲಕ್ಷ್ಮೀಶ್, ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ರಾಜೇಶ್ ಆರ್. ಬುರುಡೇಕಟ್ಟೆ, ಶ್ರೀ ಎಂ. ಆರ್.ಶಾಂತಪ್ಪ, ಶ್ರೀ ಲಿಂಗರಾಜು ಡಿ. ನೊಣವಿನಕೆರೆ, ಶ್ರೀ ಹೆಚ್. ರಾಜಶೇಖರ್,  ಮಹಾಪೋಷಕರಾದ ಶ್ರೀ ಪಿ. ಬಿ. ರಾಜಶೇಖರ್, ಚಿಕ್ಕಮಗಳೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಗಳಾದ ಶ್ರೀ ಮಂಜುನಾಥ್, ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಘಟಕದ ಕಾರ್ಯದರ್ಶಿಗಳಾದ ಲಕ್ಕವಳ್ಳಿಯ ಶ್ರೀ ರಮೇಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು. ಸ್ಥಳೀಯ ಅಜ್ಜಂಪುರ ಗ್ರಾಮದ ದೇವಾಂಗ ಸಮಾಜದ ಅಧ್ಯಕ್ಷರಾದ ಶ್ರೀ ಕೃಷ್ಣಮೂರ್ತಿ,  ಕಾರ್ಯದರ್ಶಿ ಶ್ರೀ ಪ್ರಹ್ಲಾದ್, ಶ್ರೀ ಶಿವಾನಂದ ರವರು ಮತ್ತು ಗ್ರಾಮದ ನೂರಾರು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಈ ಸಭೆಯಲ್ಲಿ ಅಜ್ಜಂಪುರ ಸುತ್ತಲಿನ ಅಣ್ಣೆ, ಅತ್ತಿಮೊಗ್ಗೆ, ಸೊಲ್ಲಾಪುರ, ಮುದಿಗೆರೆ, ಆಸಂದಿ ಮುಂತಾದ ಗ್ರಾಮಗಳ ಸಮಾಜದ ಮುಖಂಡರುಗಳು ಭಾಗವಹಿಸಿದ್ದರು.

ಅಜ್ಜಂಪುರದ ಸಮಾಜದ ಮುಖಂಡರಾದ ಶ್ರೀ ಶಿವಾನಂದ ಮತ್ತು ಶ್ರೀ ಪ್ರಹ್ಲಾದ್ ಸಹೋದರರು ಹಾಗೂ ಚಿಕ್ಕಮಗಳೂರು ಜಿಲ್ಲೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಗಳಾದ ಶ್ರೀ ಮಂಜುನಾಥ್ ರವರುಗಳು ಕರ್ನಾಟಕ ರಾಜ್ಯ ದೇವಾಂಗ ಸಂಘದ "ವಿದ್ಯಾ ನಿಧಿ " ಯೋಜನೆಗೆ ಮಹಾ ಪೋಷಕರಾಗುವ ಮೂಲಕ ರಾಜ್ಯ ಸಂಘಕ್ಕೆ ಬೆಂಬಲ ಸೂಚಿಸಿದರು.

ಅಜ್ಜಂಪುರ ದೇವಾಂಗ ಸಂಘಕ್ಕೆ ತಮ್ಮ ನಿವೇಶನವನ್ನು ದಾನವಾಗಿ ನೀಡಿದ ಅಜ್ಜಂಪುರದ ಶ್ರೀ ಜೋಗಿ ಪ್ರಕಾಶ್ ರವರನ್ನು ಸಭೆಯಲ್ಲಿ ಗೌರವಿಸಲಾಯಿತು. ಅನ್ಯ ಸಮಾಜದವರಾದರೂ ಸಹ ಶ್ರೀ ಜೋಗಿ ಪ್ರಕಾಶ್ ರವರು ರಾಜ್ಯ ಸಂಘದ ವಿದ್ಯಾನಿಧಿಗೆ ರೂ. 10,000 ಗಳನ್ನು ನೀಡುವ ಮೂಲಕ ತಮ್ಮ ಔದಾರ್ಯವನ್ನು ಮೆರೆದರು. ಇವರಿಗೆ ರಾಜ್ಯ ಸಂಘವು ಧನ್ಯವಾದಗಳನ್ನು ಅರ್ಪಿಸುತ್ತದೆ.

ಕರ್ನಾಟಕ ರಾಜ್ಯ ದೇವಾಂಗ ಸಂಘದ ಪರವಾಗಿ ಅಜ್ಜಂಪುರ ಗ್ರಾಮದ ಸಮಾಜದ ಮುಖಂಡರುಗಳಿಗೆ ಗೌರವಿಸಿ ಸನ್ಮಾನಿಸಲಾಯಿತು.

ಅಜ್ಜಂಪುರ ದೇವಾಂಗ ಸಮಾಜದ ವತಿಯಿಂದ ಕರ್ನಾಟಕ ರಾಜ್ಯ ದೇವಾಂಗ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು.

ಸಭೆಯನ್ನು ವ್ಯವಸ್ಥಿತವಾಗಿ ಆಯೋಜಿಸಿ ಯಶಸ್ವಿಯಾಗಿ ನಡೆಸಿಕೊಟ್ಟ ಅಜ್ಜಂಪುರ ಗ್ರಾಮದ ದೇವಾಂಗ ಸಮಾಜ ಬಾಂಧವರಿಗೆ ಕರ್ನಾಟಕ ರಾಜ್ಯ ದೇವಾಂಗ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರ ಪರವಾಗಿ ಅಭಿನಂದನೆಗಳು.

ಈ ಸಂದರ್ಭದಲ್ಲಿ ತೆಗೆದ ಕೆಲವು ಚಿತ್ರಗಳು :

 

ಧನ್ಯವಾದಗಳು : ಶ್ರೀ ರಮೇಶ್ ಅವರಿಗೇ

 

Image: 
Categories: 
Share Share
Scroll to Top